ಎಸ್.ಮಹೇಂದರ್- ಶ್ರೀನಗರ ಕಿಟ್ಟಿ-ಕೃತಿ ಕರಬಂಧ ಪಾಪು
Posted date: 30 Thu, Apr 2015 – 08:41:36 AM

ಯುಟಿಸಿ ಎಂಟರ್‌ಟೈನರ‍್ಸ್ ಲಾಂಛನದಲ್ಲಿ ಗಾಮಿ ಬಂಡಿಹಳ್ಳಿ ನಿರ್ಮಾಣದ ಪಾಪು  ಚಿತ್ರದ ಚಿತ್ರೀಕರಣ ಮುಂದಿನ ತಿಂಗಳು ಎರಡನೇ ವಾರದಲ್ಲಿ ಆರಂಭಗೊಳ್ಳಲಿದೆ.  ಇದಕ್ಕೆ ಮೈ ಹಾರ್ಟ್‌ಬೀಟ್ಸ್ ಯುವರ್ ನೇಮ್ ಟ್ಯಾಗ್ ಲೈನ್ ಹೊಂದಿರುವ ಈ  ಚಿತ್ರಕ್ಕೆ ಎಸ್.ಮಹೇಂದರ್ ನಿರ್ದೇಶಕರು. ಛಾಯಾಗ್ರಹಣ -ಜೆ.ಎಸ್.ವಾಲಿ, ಸಂಗೀತ-ಅರ್ಜುನ್ ಜನ್ಯ, ಸಂಕಲನ-ಕೆ.ಎಂ.ಪ್ರಕಾಶ್, ತಾರಾಗಣದಲ್ಲಿ - ಶ್ರೀನಗರ ಕಿಟ್ಟಿ, ಕೃತಿ ಕರಬಂಧ, ಸುಹಾಸಿನಿ, ಶರತ್‌ಬಾಬು, ರಂಗಾಯಣ ರಘು. ತಬಲಾನಾಣಿ, ಮುಂತಾದವರಿದ್ದಾರೆ. ಈ ಚಿತ್ರ ನವಿರಾದ ಪ್ರೇಮಕಥೆ ಹೊಂದಿರುತ್ತೆ, ನನ್ನ ಹಲವು ದಿನಗಳ ಕನಸು ನನಸಾಗಲು ಈ ಚಿತ್ರ ನನಗೆ ನೆರವಾಗಲಿದೆ  ಬಹಳ ದಿನದ ಮನದಲ್ಲಿ ಉಳಿದಿದ್ದ ಈ ಪ್ರೇಮಕಥೆ ಪ್ರತಿಯೊಬ್ಬ ಪ್ರೇಕ್ಷಕನಲ್ಲೂ ಮತ್ತೆ ಹಳೆಯ ಎಸ್.ಮಹೇಂದರ್‌ನನ್ನು ಕಾಣಬಹುದು, ಈಗಾಗಲೇ ಅರ್ಜುನ್ ಜನ್ಯ ಸಾರಥ್ಯದಲ್ಲಿ ಸಂಗೀತ ಸಂಯೋಜನೆಗೆ ತೊಡಗಿದ್ದು ೬ ಹಾಡುಗಳಿರುತ್ತದೆ. ಬೆಂಗಳೂರು - ಊಟಿ - ಕೇರಳ - ಕುಲು- ಮನಾಲಿ - ಡಾರ್ಜಲಿಂಗ್ ಚಿತ್ರೀಕರಣಕ್ಕೆ ಆಯ್ಕೆಯಾಗಿರುವ ಸ್ಥಳಗಳು. ಇಂಪಾದ ಹಾಡುಗಳೊಂದಿಗೆ ಮತ್ತೊಂದು ಪ್ರೇಮಕಾವ್ಯವನ್ನು ತೆರೆಗೆ ತರುತ್ತಿರುವುದಾಗಿ ಎಸ್.ಮಹೇಂದರ್ ತಿಳಿಸಿದ್ದಾರೆ. ಈ ಚಿತ್ರದ ಉಳಿದ ತಾರಾಗಣ ಹಾಗೂ ತಾಂತ್ರಿಕ ವರ್ಗದ ಆಯ್ಕೆ ಅಂತಿಮ ಹಂತದಲ್ಲಿದೆ.

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed